ಶಿಶುಮಾಯಣ

 ಶಿಶುಮಾಯಣ

  • ಕಾಲ: ಸು. ಕ್ರಿ.ಶ.೧೫೦೦ *
  • ಜೈನಧರ್ಮೀಯ.
  • ಎರಡು ಕೃತಿಗಳನ್ನು ಬರೆದಿದ್ದಾನೆ. 1. ‘ತ್ರಿಪುರ ದಹನ ಸಾಂಗತ್ಯ’, 2.‘ಅಂಜನಾಚರಿತ್ರೆ’

  1. ‘ತ್ರಿಪುರ ದಹನ ಸಾಂಗತ್ಯ’: ಇದು ಮುನ್ನೂರು ಪದ್ಯಗಳನ್ನೊಳಗೊಂಡಿರುವ ಚಿಕ್ಕ ಕೃತಿ. ಶೈವ ಸಂಪ್ರದಾಯದಲ್ಲಿ ಶಿವನ ಲೀಲೆಗಳಲ್ಲಿ ಕಂಡುಬರುವ ಶಿವನು ಮಾಡಿದ ತ್ರಿಪುರ ದಹನ ದ ಕಥೆಯಂತೆ ಇಲ್ಲಿ ಜೈನತತ್ವಕ್ಕನುಗುಗುಣವಾಗಿ ಜನನ-ಜರಾ-ಮರಣಗಳೆಂಬ ಮೂರು ಪುರಗಳನ್ನು ಆದೀಶ್ವರನು ಸುಟ್ಟ ವಿಷಯವನ್ನು ತೆಗೆದುಕೊಂಡು ಸಾಂಗತ್ಯದಲ್ಲಿ ಕೃತಿ ರಚಿಸಲಾಗಿದೆ.
  2.  ‘ಅಂಜನಾಚರಿತ್ರೆ’:- ಇದು ೧೫ ಸಂಧಿಗಳಲ್ಲಿ ವಿಸ್ತಾರಗೊಂಡಿದ್ದು ೬೦೦೦ ಪದ್ಯಗಳನ್ನು ಹೊಂದಿರುವ ಬೃಹತ್ ಸಾಂಗತ್ಯ ಕಾವ್ಯವಾಗಿದೆ. ಇದಕ್ಕೆ ಆಕರ ರವಿಷೇಣನ ‘ಪದ್ಮಚರಿತ’ (ಜೈನರಾಮಾಯಣ). ‘ಪದ್ಮಚರಿತ’ ದಲ್ಲಿರುವ ‘ಅಂಜನಾಚರಿತ್ರೆ’ಯ ಭಾಗವನ್ನು ಮಾತ್ರ ತೆಗೆದುಕೊಂಡು ಶಿಶುಮಾಯಣನು ಬೃಹತ್ಕಾವ್ಯ ರಚಿಸಿದ್ದಾನೆ.

      ಎರಡೂ ಗ್ರಂಥಗಳ ಶೈಲಿ ಸರಳವಾಗಿದೆ. ಶಿಶುಮಾಯಣನು ತಾನು ಮಹಾನ್ ಪಂಡಿತನಲ್ಲವೆಂದೂ ಲಕ್ಷಣಜ್ಞಾನವಿಲ್ಲದವನೆಂದೂ ಹೇಳಿಕೊಂಡಿದ್ದಾನೆ. ("ಅಕ್ಷರ ಭೇದವನರಿಯದೆನಗೆ ಮತ್ತೆ ಲಕ್ಷಣಗಳು ಗೋಚರವೇ", "ಕವಿತೆಯ ಮಾರ್ಗದ ಸುವಿಚಾರಗಳ ವಿವರಿಪೊಡೇನೆಂದರಿಯೆ", "ಲಕ್ಷಣಮಿಲ್ಲದೊಡೀ ಕೃತಿಗೆ ಸಲ್ಲಕ್ಷಣಯುತೆ ಸತಿಯರೊಳು ಲಕ್ಷ್ಯವೆನಿಸುವಂಜನಾಚರಿತವನು ವಿಚಕ್ಷಣ ರೆಯ್ದೆ ಕೇಳುವುದು")

Post a Comment

0 Comments
* Please Don't Spam Here. All the Comments are Reviewed by Admin.