ಎರಡನೆಯ ನಾಗವರ್ಮ

 ಎರಡನೆಯ ನಾಗವರ್ಮ

ಕಾಲ : ಕ್ರಿ.ಶ.ಸು.೧೧೪೫

ಆಶ್ರಯದಾತ: ಚಾಲುಕ್ಯ ಜಗದೇಕಮಲ್ಲ

ಪ್ರಮುಖ ಕೃತಿಗಳು:

  1. ವರ್ಧಮಾನಪುರಾಣ
  2. ಛಂದೋವಿಚಿತಿ(ಉಪಲಬ್ಧವಾಗಿಲ್ಲ)
  3. ಅಭಿದಾನ ವಸ್ತುಕೋಶ
  4. ಕಾವ್ಯಾವಲೋಕನ
  5. ಕರ್ಣಾಟಕ ಭಾಷಾಭೂಷಣ
  6. ಅಭಿದಾನ ರತ್ನಮಾಲಾ

  • ಕಂದ ಮತ್ತು ವೃತ್ತಗಳಲ್ಲಿ ‘ಅಭಿದಾನ ವಸ್ತುಕೋಶ’ ವನ್ನು ರಚಿಸಿದ್ದಾನೆ. ಕನ್ನಡ ಕಾವ್ಯಗಳಲ್ಲಿರುವ ಸಂಸ್ಕೃತ ಶಬ್ದಗಳಿಗೆ ಅರ್ಥ ಗಳನ್ನು ಈ ನಿಘಂಟಿನಲ್ಲಿ ನಿರೂಪಿಸಿದೆ.
  • ‘ಅಭಿದಾನ ರತ್ನಮಾಲಾ’ ಕರ್ನಾಟಕ ಟೀಕೆ ಎಂಬ ನಿಘಂಟುವಾಗಿದೆ. ಇದು ಭಟ್ಟಹಲಾಯುಧನ ‘ಅಭಿಧಾನ ರತ್ನಮಾಲೆ’ ಎಂಬ ಸಂಸ್ಕೃತ ನಿಘಂಟಿಗೆ ಬರೆದಿರುವ ಮೊಟ್ಟಮೊದಲನೆಯ ಟೀಕು. ಇದರಲ್ಲಿ ಸಂಸ್ಕೃತ, ಸಮಸಂಸ್ಕೃತ ಶಬ್ದಗಳಿಗೆ ಅರ್ಥ ನೀಡಲಾಗಿದೆ. 
  • ಕನ್ನಡ ವ್ಯಾಕರಣಗ್ರಂಥಗಳ ಪೈಕಿ, ಸದ್ಯದ ಮಟ್ಟಿಗೆ ಲಭ್ಯವಿರುವ ಮೊದಲ ಗ್ರಂಥವೆಂದರೆ ಎರಡನೆಯ ನಾಗವರ್ಮನ ‘ಶಬ್ದಸ್ಮೃತಿ’ಯೇ. ಆದರೆ ಇದು ಪೂರ್ಣಗ್ರಂಥವಲ್ಲ, ಅವನ ‘ಕಾವ್ಯಾವ ಲೋಕನ’ವೆಂಬ ಗ್ರಂಥದ ಮೊದಲ ಅಧಿಕರಣ (ಅಧ್ಯಾಯ) ಮಾತ್ರ. 
  • ‘ಕವಿರಾಜಮಾರ್ಗ’ದಂತೆಯೇ ‘ಕಾವ್ಯಾವಲೋಕನ’ವೂ ಒಂದು ಅಲಂಕಾರ ಗ್ರಂಥ. ಆದರೆ ಅಲ್ಲಿಯಂತೆ, ದೋಷನಿರೂಪಣೆಯ ಸಂದರ್ಭದಲ್ಲಿ, ಪ್ರಾಸಂಗಿಕವಾಗಿ ಮಾತ್ರ ಕೆಲವು ವ್ಯಾಕರಣ ವಿಚಾರಗಳನ್ನು ನಿರೂಪಿಸುವಷ್ಟಕ್ಕೆ ಅದು ಸೀಮಿತವಾಗಿಲ್ಲ. ಸಂಗ್ರಹವಾಗಿ ಯಾದರೂ ಇಡಿಯಾಗಿ ಕನ್ನಡ ವ್ಯಾಕರಣವನ್ನು ನಿರೂಪಿಸುತ್ತದೆ. ಈ ದೃಷ್ಟಿ ಯಿಂದ, ಗ್ರಂಥವೊಂದರ ಭಾಗವೇ ಆದರೂ ‘ಶಬ್ದಸ್ಮೃತಿ’ಯು ಒಂದು ಸ್ವತಂತ್ರ ಗ್ರಂಥವೆಂದು ಕರೆಯಿಸಿಕೊಳ್ಳಬಹುದಾದ ಯೋಗ್ಯತೆಯನ್ನು ಪಡೆದಿದೆ.  ಇದು ಕನ್ನಡದಲ್ಲೆ ರಚಿತವಾಗಿರುವುದರಿಂದ, ಕನ್ನಡದಲ್ಲೇ ರಚಿತವಾದ ಕನ್ನಡದ ಮೊಟ್ಟಮೊದಲ ವ್ಯಾಕರಣವೆಂಬ ಹೆಗ್ಗಳಿಕೆ ಕೂಡ ಇದಕ್ಕೆ ದಕ್ಕಿದೆ. 

Post a Comment

0 Comments
* Please Don't Spam Here. All the Comments are Reviewed by Admin.