ಚಾಮರಸ
ಕಾಲ: ಹದಿನೈದನೆಯ ಶತಮಾನದ ಆದಿಭಾಗದಲ್ಲಿ ಅಂದರೆ ಸು.ಕ್ರಿಶ.೧೪೩೦ರಲ್ಲಿ ಜೀವಿಸಿದ್ದ ಕವಿ.
ಕೃತಿ: ‘ಪ್ರಭುಲಿಂಗ ಲೀಲೆ’ ಭಾಮಿನಿ ಷಟ್ಪದಿಯಲ್ಲಿ ಬರೆಯಲಾದ ಈತನ ಪ್ರಸಿದ್ಧ ಕಾವ್ಯ.
ಈ ಕಾವ್ಯವು ನಾಲ್ಕು ಭಾಷೆಗಳಿಗೆ ಅನುವಾದವಾಗಿದೆಯೆಂದರೆ ಇದರ ಮಹತ್ವವನ್ನು ಅರಿಯಬಹುದು. ಪಿಡುಪರ್ತಿ ಬಸವ ಕವಿಯು ಇದನ್ನು ಚಂಪೂ ರೂಪದಲ್ಲಿ, ಪಿಡುಪರ್ತಿ ಸೋಮನಾಥನು ದ್ವಿಪದಿಯಲ್ಲಿ ತೆಲುಗಿಗೆ ಅನುವಾದಿಸಿದ್ದಾರೆ. ತಿರುವಣ್ಣಾಮಲೈ ಶಿವಪ್ರಕಾಶ ಸ್ವಾಮಿಯು ತಮಿಳಿಗೆ, ಬ್ರಹ್ಮದಾಸನು ಮರಾಠಿಗೆ ಅನುವಾದಿಸಿದ್ದಾರೆ. ಈ ಕಾವ್ಯವು ಸಂಸ್ಕೃತ ಭಾಷೆಗೂ ಸಹ ಭಾಷಾಂತರವಾಗಿದೆ.
ಭಾಷೆ, ದೇಶ, ಗಡಿಗಳನ್ನು ಮೀರಿ ಬಹುಜನರ ಮಾನ್ಯತೆಗೆ ಪಾತ್ರವಾದ ಶ್ರೇಷ್ಠ ಕೃತಿ ಚಾಮರಸನ ಪ್ರಭುಲಿಂಗಲೀಲೆ. ಅಲ್ಲಮಪ್ರಭುವನ್ನು ಕುರಿತು ಭಾಮಿನಿ ಷಟ್ಪದಿಯಲ್ಲಿ ಬರೆದಿರುವ ಕೃತಿ. ಪ್ರಭುಲಿಂಗಲೀಲೆಯಲ್ಲಿ ಸಂಕೇತ, ಪ್ರತಿಮೆಗಳನ್ನು, ಗಂಭೀರಕರಿಸಿಕೊಂಡು ಅಲ್ಲಮಪ್ರಭುವಿನ ಕಥಾನಕದ ಜತೆಗೆ ಬಸವಣ್ಣ, ಅಕ್ಕಮಹಾದೇವಿ, ಸಿದ್ಧರಾಮ, ಮುಕ್ತಾಯಕ್ಕ, ಗೊಗ್ಗಯ್ಯ, ಗೋರಕ್ಷ ಮುಂತಾದವರ ಕಥಾನಕಗಳೂ ಬೆಸೆದುಕೊಂಡು ಬರುತ್ತದೆ.
