ಜಗದ್ದಳ ಸೋಮನಾಥ

 ಜಗದ್ದಳ ಸೋಮನಾಥ 

  • ಕಾಲ:  ಕ್ರಿ.ಶ. ೧೧೫೦.
  • `ಕರ್ನಾಟಕ ಕಲ್ಯಾಣಕಾರಕ' ಎಂಬ ಒಂದು ವೈದ್ಯಗ್ರಂಥವನ್ನು ರಚಿಸಿದ್ದಾನೆ. ಇದು ಕಂದ ಮತ್ತು ವೃತ್ತಗಳಲ್ಲಿ ರಚಿತವಾಗಿದೆ.
  • `ವಿಚಿತ್ರ ಕವಿ' ಎಂಬ ಬಿರುದು ಇದೆ.
  • ಇವನು ಶಾಸ್ತ್ರಕಾರನಾದರೂ ಒಳ್ಳೆಯ ಪದವಿನ್ಯಾಸ ಕೌಶಲವನ್ನು ಪಡೆದಿದ್ದ ಸಮರ್ಥಕವಿ.
  • ಪೂಜ್ಯಪಾದರು ವಿರಚಿಸಿದ ಸಂಸ್ಕೃತ ಗ್ರಂಥಕ್ಕೆ ಕನ್ನಡ ಭಾಷಾಂತರವಾದ `ಕರ್ಣಾಟಕ ಕಲ್ಯಾಣಕಾರಕ'ವು ವೃತ್ತಕಂದಗಳಲ್ಲಿ ರಚಿತವಾಗಿದೆ.
  • `ಕರ್ಣಾಟಕ ಕಲ್ಯಾಣಕಾರಕ' ಗ್ರಂಥದಲ್ಲಿ ಎಂಟು ಅಧ್ಯಾಯಗಳಿವೆ. ನಾನಾ ರೋಗಗಳ ಸ್ವರೂಪ, ನಿಧಾನ ಕ್ರಮ ಮತ್ತು ಚಿಕಿತ್ಸಾ ವಿಧಾನಗಳನ್ನು ಕವಿ ಇದರಲ್ಲಿ ಹೇಳಿದ್ದಾನೆ.
  • ಈ ಕವಿ ಜೈನನಾದ್ದರಿಂದ ಈ ಕೃತಿಯಲ್ಲಿ ಮದ್ಯ, ಮಧು, ಮಾಂಸ ವರ್ಜಿತವಾದ ಔಷಧಿಗಳನ್ನು ಮಾತ್ರ ಹೇಳಿದ್ದಾನೆ. ಅತಿಸಾರ, ಗುಲ್ಮ ರೋಗ ಮೊದಲಾದ ಹಲವು ವ್ಯಾಧಿಗಳ ವಿಷಯವನ್ನು ಸೋಮನಾಥ ವಿಸ್ತಾರವಾಗಿ ನಿರೂಪಿಸಿದ್ದಾನೆ.
  • ಜೊತೆಗೆ ಚರಕ,ವಾಗ್ಬಟ, ಸಿದ್ಧಸಾರ ಮೊದಲಾದ ಗ್ರಂಥಗಳಿಂದ ವಿಷಯಗಳನ್ನು ಆರಿಸಿ ಸೇರಿಸಲಾಗಿದೆ ಎಂದೂ, ಅಭಯಚಂದ್ರ ಸಿದ್ಧಾಂತಿ ಹಾಗೂ ಸುಮನೋಬಾಣರು ತನ್ನ ಗ್ರಂಥವನ್ನು ಪರಿಷ್ಕರಿಸಿದರೆಂದೂ, ಇದರಲ್ಲಿ ಹೇಳಲ್ಪಟ್ಟಿರುವ ಚಿಕತ್ಸೆಗಳು ಮದ್ಯ, ಮಾಂಸ, ಮಧು ವರ್ಜಿತವಾದವುಗಳೆಂದೂ ಪ್ರಶಂಶಿಸಿಕೊಂಡಿದ್ದಾನೆ. 
  • ಮೈಸೂರಿನ ಪ್ರಾಚ್ಯವಸ್ತು ಸಂಶೋಧನಾಲಯದಲ್ಲಿ ಈ ಗ್ರಂಥದ ತಾಳಪತ್ರದ ಪ್ರತಿಯೊಂದಿದೆ. ಇದು ೩೩ ಅಧ್ಯಾಯವುಳ್ಳ ಮಧ್ಯಮ ಪ್ರಮಾಣದ ಗ್ರಂಥ. ಕೆಲವು ಕಡೆ ಗ್ರಂಥಾಪಾತವಿದ್ದು ವಾಕ್ಯ ದೋಷಗಳೂ ಸಾಕಷ್ಟಿವೆ. ಪದ್ಯರೂಪವಾಗಿರುವ ಈ ಗ್ರಂಥ ಕನ್ನಡದ ವೈದ್ಯಗ್ರಂಥಗಳ ಪೈಕಿ ಮೊದಲನೆಯದು ಎಂದು ಪ್ರಮುಖ ಸ್ಥಾನವನ್ನು ಹೊಂದಿದೆ.

Post a Comment

0 Comments
* Please Don't Spam Here. All the Comments are Reviewed by Admin.