ಲಕ್ಕಣ ದಂಡೇಶ
ಕಾಲ: ಕ್ರಿ.ಶ.೧೪೨೫
ಆಶ್ರಯ: ಈತನು ಪ್ರೌಢ ದೇವರಾಯನ ಮಹಾ ದಂಡನಾಯಕನಾಗಿದ್ದನು.
ಕೃತಿ: ಶಿವತತ್ವ ಚಿಂತಾಮಣಿ,
ಶಿವತತ್ವ ಚಿಂತಾಮಣಿ:
- ಇದು ವಾರ್ಧಕ ಷಟ್ಪದಿಯಲ್ಲಿದೆ. ೫೫ ಸಂಧಿಗಳನ್ನು ಹೊಂದಿದ್ದು ಸುಮಾರು ಎರಡು ಸಾವಿರಕ್ಕೂ ಅಧಿಕ ವಾರ್ಧಕ ಷಟ್ಪದಿಗಳಿಂದ ಕೂಡಿದೆ.
- ಇದು ವೀರಶೈವ ಧರ್ಮಕ್ಕೆ ಸಂಬಂಧಿಸಿದ ಕೃತಿಯಾಗಿದ್ದು ಹಲವಾರು ತಾತ್ವಿಕ ಮತ್ತು ಚಾರಿತ್ರಿಕ ಅಂಶಗಳನ್ನು ಒಳಗೊಂಡಿರುವ ಬೃಹತ್ ಕೃತಿಯಾಗಿದೆ.
- ಇದು ಒಂದು ವಿಧದಲ್ಲಿ ವೀರಶೈವ ವಿಶ್ವಕೋಶವಾಗಿದೆ.
- ಇದಲ್ಲದೆ ಲಕ್ಕಣ ದಂಡೇಶ ಕನ್ನಡದ ಚಿಣ್ಣರಿಗೆ ಬರೆದಂತಿರುವ ಪತ್ರಗುಚ್ಛ ‘ಲಕ್ಕಣ್ಣ ದಂಡೇಶನ ಓಲೆಗಳು’ ನಾಡಿನ ಗತವೈಭವವನ್ನು ಬಿಂಬಿಸಿ ಕನ್ನಡಿಗರಲ್ಲಿ ದೇಶಪ್ರೇಮವನ್ನೂ, ಸ್ವಾಭಿಮಾನವನ್ನೂ ಬಡಿದೆಬ್ಬಿಸುವಂತಿವೆ.
